Featured NewsKrushi

ನಾಳೆಯಿಂದ ಮೂಡುಬಿದಿರೆಯಲ್ಲಿ ಆಳ್ವಾಸ್‌ ಕೃಷಿಸಿರಿ

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷ ಣ ಪ್ರತಿಷ್ಠಾನ ಪ್ರತಿವರ್ಷ ನಡೆಸಿಕೊಂಡು ಬಂದಿರುವ ನಾಡು- ನುಡಿ- ಸಂಸ್ಕೃತಿಯ ಸಮ್ಮೇಳನ ಆಳ್ವಾಸ್‌ ನುಡಿಸಿರಿ- ಸಮ್ಮೇಳನ ಡಿ.1, 2 ಮತ್ತು 3ರಂದು ಮೂಡುಬಿದಿರೆಯ ಸುಂದರಿ ಆನಂದ ಆಳ್ವ ಆವರಣದ ರತ್ನಾಕರವರ್ಣಿ ವೇದಿಕೆಯಲ್ಲಿ ಎಂ. ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ನಡೆಯಲಿದೆ.

ಆಳ್ವಾಸ್‌ ಕೃಷಿಸಿರಿ 2017
ಡಿ.1, 2 ಮತ್ತು 3ರಂದು ನಡೆಯುವ ಕೃಷಿಸಿರಿಯ ಉದ್ಘಾಟನಾ ಸಮಾರಂಭ ನ.30ರಂದು ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಜಿ.ಎನ್‌.ಪ್ರಕಾಶ್‌ ಕಮ್ಮರಡಿ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ.ವೇಣುಗೋಪಾಲ್‌, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಆನಂದ್‌ ಭಾಗವಹಿಸಲಿದ್ದಾರೆ.
ಜಾನುವಾರು ಪ್ರದರ್ಶನ, ಬೆಕ್ಕುಗಳ ಪ್ರದರ್ಶನ, ಬೆಕ್ಕುಗಳ ಸೌಂದರ್ಯ ಪ್ರದರ್ಶನ, ಶ್ವಾನ- ಶ್ವಾನಮರಿ- ಶ್ವಾನ ಪ್ರಾಮಾಣಿಕತೆ ಹಾಗೂ ಶ್ವಾನ ಸೌಂದರ್ಯ ಪ್ರದರ್ಶನ, 600ಕ್ಕೂ ಮಿಕ್ಕಿ ಬೃಹತ್‌ ಮತ್ಸ್ಯಾಲಯಗಳ ಮೂಲಕ ಮತ್ಸ್ಯಪ್ರದರ್ಶನ, 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪ್ಪುಗಳ ಪ್ರದರ್ಶನ, ವಿದೇಶಿ ಪಕ್ಷಿ, ಬೋನ್ಸಾಯಿ ಕೃಷಿ- ಪುಷ್ಪ, ನ್ಯೂಜಿಲ್ಯಾಂಡ್‌ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣರ ಸಸ್ಯಗಳು- ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿ ರಚನೆ, 44 ತಳಿ ಬಿದಿರು ಗಿಡ, 40 ತಳಿ ಬಿದಿರು, ಕೃಷಿ ಸಂಬಂಧಿ ಗುಡಿ ಕೈಗಾರಿಕೆಗಳು, ಎರಡು ಎಕರೆ ಪ್ರದೇಶದಲ್ಲಿ ನೈಜ ತರಕಾರಿ ಕೃಷಿ, 250ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಕೋಣಗಳ ಫ್ಯಾಶನ್‌ ಶೋ:
ಡಿ.1ರಂದು ಜಾನುವಾರು ಪ್ರದರ್ಶನ, ಸಂಜೆ 4.30ರಿಂದ 6ರ ವರೆಗೆ ಓಟದ ಕೋಣಗಳ ಸೌಂದರ್ಯದ ಸ್ಪರ್ಧೆಯಿದ್ದು, ವಿಜೇತ ಕೋಣಗಳಿಗೆ 50, ಸಾವಿರ ರೂ., 30 ಸಾವಿರ ರೂ. ಮತ್ತು 20 ಸಾವಿರ ಬಹುಮಾನಗಳಿವೆ. ಕೋಣ ಓಡಿಸುವವರ ಸೌಂದರ್ಯ ಸ್ಪರ್ಧೆಯೂ ನಡೆಯಲಿದ್ದು 10 ಸಾವಿರ ಮತ್ತು ಏಳು ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ವಿವಿಧ ಸಿರಿಗಳು:
ರಾಜ್ಯದ 35 ಚಿತ್ರಕಲಾವಿದರಿಂದ ಆಳ್ವಾಸ್‌ ಚಿತ್ರಸಿರಿ, ದೇಶದ 2000ಕ್ಕೂ ಮಿಕ್ಕಿ ಛಾಯಾಚಿತ್ರಕಾರರ ಛಾಯಾಚಿತ್ರಗಳ ಪ್ರದರ್ಶನ ಮತ್ತು ಸ್ಪರ್ಧೆಯ ಆಳ್ವಾಸ್‌ ಛಾಯಾಚಿತ್ರಸಿರಿ, ಚುಕ್ಕಿ ಚಿತ್ರಗಳ ರಚನೆ ಮತ್ತು ಪ್ರದರ್ಶನದ ಆಳ್ವಾಸ್‌ ಚುಕ್ಕಿ ಚಿತ್ರಸಿರಿ, ಆಳ್ವಾಸ್‌ ಗಾಳಿಪಟ ಸಿರಿ, ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗಾಗಿ ಆಳ್ವಾಸ್‌ ಉದ್ಯೋಗಸಿರಿ, ಕನ್ನಡ ನಾಟಕಗಳ ಪ್ರದರ್ಶನ ಆಳ್ವಾಸ್‌ ರಂಗಸಿರಿ, ಕನ್ನಡ ಚಲನಚಿತ್ರ ಪ್ರದರ್ಶನದ ಆಳ್ವಾಸ್‌ ಸಿನಿಸಿರಿ, ರಾಜ್ಯದ 30 ವ್ಯಂಗ್ಯಚಿತ್ರ ಕಲಾವಿದರಿಂದ ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನದ ಆಳ್ವಾಸ್‌ ವ್ಯಂಗ್ಯಚಿತ್ರ ಸಿರಿ, ಆಳ್ವಾಸ್‌ ಗೂಡುದೀಪ ಸಿರಿ, ಆಳ್ವಾಸ್‌ ಯಕ್ಷ ಸಿರಿ, ಆಳ್ವಾಸ್‌ ವಿಜ್ಞಾನ ಸಿರಿಗಳು ಮೇಳೈಸಿ ಆಳ್ವಾಸ್‌ ನುಡಿಸಿರಿ 2017ಕ್ಕೆ ಬಲ ನೀಡಲಿವೆ.

ವರಧಿಕೃಪೆ: ವಿಜಯ ಕರ್ನಾಟಕ

ಚಿತ್ರಕೃಪೆ: ನುಡಿಸಿರಿ ಜಾಲತಾಣ

Also read  ರಾಜ್ಯ ಬಜೆಟ್ 2019-ರೈತರಿಗೆ ನೀಡಿದ ಅನುದಾನ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ

Leave a Reply