ಅಂತಾರಾಷ್ಟ್ರೀಯ ದರ ಸಿಗದಕ್ಕೆ ಕಾಫಿ ಬೆಳೆಗಾರರ ಆಕ್ರೋಶ:ಗೋಣಿಕೊಪ್ಪದಲ್ಲಿ ರೈತರ ಸಭೆ – ಹೋರಾಟದ ತೀರ್ಮಾನ
ಗೋಣಿಕೊಪ್ಪದಲ್ಲಿ ರೈತರ ಸಭೆ – ಹೋರಾಟದ ತೀರ್ಮಾನ
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಭವನದಲ್ಲಿ ಶನಿವಾರ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಬೆಲೆ ಕುಸಿತ, ವ್ಯಾಪಾರಿಗಳ ಏಕಪಕ್ಷೀಯತೆ ಹಾಗೂ ರೈತರ ಹಿತಾಸಕ್ತಿ ಕಾಪಾಡುವ ಹೋರಾಟ ಕುರಿತಾಗಿ ತೀವ್ರ ಚರ್ಚೆ ನಡೆಯಿತು. ಈ ಸಭೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷರಾದ ಕದ್ಯಮಡ ಮನು ಸೋಮಯ್ಯ ನೇತೃತ್ವ ವಹಿಸಿದ್ದರು.
ರೈತರ ಪ್ರಮುಖ ಅಹವಾಲುಗಳು
- ಅಂತರಾಷ್ಟ್ರೀಯ ಹಾಗೂ ಸ್ಥಳೀಯ ಬೆಲೆಯ ಅಂತರ: ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾದರೂ, ಸ್ಥಳೀಯ ವ್ಯಾಪಾರಿಗಳು ಖರೀದಿ ದರವನ್ನು ಹೆಚ್ಚಿಸದೆ ರೈತರಿಗೆ ನಷ್ಟ ಮಾಡುತ್ತಿದ್ದಾರೆ. ಪ್ರತಿ EP ಮೇಲೆ ₹30–₹40 ನಷ್ಟ.
- ಬೆಲೆ ಏರಿಕೆ – ಖರ್ಚಿನ ಒತ್ತಡ: ರಾಸಾಯನಿಕ ಗೊಬ್ಬರ, ಕೂಲಿ ವೇತನ, ಜೀಪ್ ಭಾಡಿ ಮುಂತಾದ ವೆಚ್ಚಗಳು ಹೆಚ್ಚಾಗಿವೆ. ಬೆಲೆ ಸಿಗದ ಕಾರಣ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
- ವ್ಯಾಪಾರಿಗಳ ಬೆಲೆ ನಿಯಂತ್ರಣ: ವ್ಯಾಪಾರಿಗಳು ಹಾಗೂ ಎಕ್ಸ್ಪೋರ್ಟರ್ಗಳು ಕೃತಕವಾಗಿ ಬೆಲೆ ಕುಸಿಯುವಂತೆ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು. ಇದು ರೈತರ ಮೇಲಿನ ದ್ರೋಹ.
ಸಭೆಯಲ್ಲಿ ಹಂಚಿದ ಅಭಿಪ್ರಾಯಗಳು
ಬ್ರೆಜಿಲ್ ಹಾಗೂ ವಿಯೆಟ್ನಾಂ ದೇಶಗಳಲ್ಲಿ ಕಾಫಿ ಉತ್ಪಾದನೆ ಕಡಿಮೆಯಾಗಿದ್ದು, ಭಾರತದಲ್ಲಿ ಬೇಡಿಕೆ ಹೆಚ್ಚಿದರೂ ಲಾಭ ರೈತರ ಕೈ ಸೇರಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಗ್ರಹಣೆಯ ಸಲಹೆ: ರೈತರು ತಮ್ಮ ಕಾಫಿಯನ್ನು ಸ್ವಂತ ಗೋಡೌನ್ಗಳಲ್ಲಿ ಸಂಗ್ರಹಿಸಿಕೊಳ್ಳಬೇಕು, ತುರ್ತು ಮಾರಾಟ ತಪ್ಪಿಸಿಕೊಳ್ಳಬೇಕು.
ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆ: ಅಂತರಾಷ್ಟ್ರೀಯ ಮಟ್ಟದ ಬೆಲೆ ನೀಡದ ವ್ಯಾಪಾರಿಗಳ ಲೈಸೆನ್ಸ್ಗಳನ್ನು ರದ್ದುಪಡಿಸಬೇಕು ಎಂದು ಮನು ಸೋಮಯ್ಯ ಎಚ್ಚರಿಸಿದರು.
ರೈತರ ಪ್ರತಿಕ್ರಿಯೆ
ಜಿಲ್ಲೆಯಾದ್ಯಂತದಿಂದ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು. ನಿರೀಕ್ಷೆಗೂ ಹೆಚ್ಚು ರೈತರ ಹಾಜರಾತಿ ರೈತ ನಾಯಕರನ್ನೇ ಅಚ್ಚರಿಗೊಳಿಸಿತು. ಆದರೆ ವ್ಯಾಪಾರಿಗಳು ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಸಭೆಗೆ ಹಾಜರಾಗದೆ ರೈತರ ಅವಮಾನ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮುಂದಿನ ಹೋರಾಟದ ರೂಪುರೇಷೆ
- 15 ಸದಸ್ಯರ ಸಮಿತಿ ರಚನೆ ಮಾಡಿ ಮುಂದಿನ ಹೋರಾಟದ ಕಾರ್ಯತಂತ್ರ ರೂಪಿಸಲಾಯಿತು.
- ಮುಂದಿನ ಸಭೆ ಸಂಸದರು, ಶಾಸಕರು ಹಾಗೂ ಕಾಫಿ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.
- ರೈತರ ಬೇಡಿಕೆ ಪೂರೈಸದಿದ್ದಲ್ಲಿ ರಸ್ತೆ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಲಾಯಿತು.
- ಹೋರಾಟವನ್ನು ಕೊಡಗು ಜಿಲ್ಲೆಯಿಂದ ಪ್ರಾರಂಭಿಸಿ, ನಂತರ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
ಸಭೆಯ ಅಂತಿಮ ನಿರ್ಣಯ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದ್ದರೂ ರೈತರಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ. ವ್ಯಾಪಾರಿಗಳ ಕೃತಕ ಬೆಲೆ ನಿಯಂತ್ರಣವೇ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದರು. ರೈತರ ಏಕತೆ ಹಾಗೂ ಸಂಘಟಿತ ಹೋರಾಟದ ಮೂಲಕ ಮಾತ್ರ ನ್ಯಾಯ ಸಾಧ್ಯ ಎಂದು ತೀರ್ಮಾನಿಸಲಾಯಿತು.