CoffeeFeatured News

ಕಾಫೀ ಉದ್ಯಮ ಉತ್ತೇಜಿಸಲು ಕಾಯ್ದೆ ಸರಳಿಗೊಳಿಸಲಿದೆ ಕೇಂದ್ರ ಸರ್ಕಾರ ಎಂದ ಪಿಯೂಷ್ ಗೋಯೆಲ್

ಬೆಂಗಳೂರಿನ ಕಾಫೀ ಮಂಡಳಿ ಕೇಂದ್ರ ಕಚೇರಿಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರು ಕಾಫಿ ಬೆಳೆಗಾರರು, ರೋಸ್ಟರ್‌ಗಳು, ರಫ್ತುದಾರರು ಮತ್ತು ಇತರ ಪಾಲುದಾರರೊಂದಿಗೆ ಸಂವಾದದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿದರು. ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ (SARFAESI) ಕಾಯ್ದೆಯಡಿ ಬ್ಯಾಂಕ್​ಗಳು ನೀಡಿರುವ ನೋಟಿಸ್‌ಗಳ ದೃಷ್ಟಿಯಿಂದ ಕಾಫೀ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ಸಂಬಂಧಿಸಿದ ಇತರ ಸಚಿವಾಲಯಗಳೊಂದಿಗೆ ಅನುಕೂಲಕರ ರೀತಿಯಲ್ಲಿ ಚರ್ಚಿಸಲಾಗುವುದು ಮತ್ತು ಆರಂಭಿಕ ದಿನಾಂಕದಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸಚಿವರು ಕಾಫೀ ಬೆಳೆಗಾರರಿಗೆ ಭರವಸೆ ನೀಡಿದರು.

Also read  Rabobank cuts Brazil coffee production forecast

ಸಭೆಯ ಪ್ರಮುಖ ನಿರ್ಧಾರಗಳು ಹೀಗಿವೆ.

1.ಕಾಫಿ ಕಾಯಿದೆಯ ಸರಳೀಕರಣ:

ಪ್ರಸ್ತುತ ಕಾಫೀ ಕಾಯ್ದೆಯನ್ನು 1942ರಲ್ಲಿ ಜಾರಿಗೆ ತರಲಾಗಿದೆ ಮತ್ತು ಇದು ಅನಗತ್ಯ ಹಾಗೂ ಕಾಫೀ ವ್ಯಾಪಾರಕ್ಕೆ ಅಡ್ಡಿಯಾಗಿರುವ ಅನೇಕ ನಿಬಂಧನೆಗಳನ್ನು ಹೊಂದಿದೆ. ಆದ್ದರಿಂದ, ಕಾನೂನಿನ ನಿಬಂಧನೆಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಮತ್ತು ಕಾಫೀ ಕ್ಷೇತ್ರದ ಪ್ರಸ್ತುತ ಅಗತ್ಯಗಳಿಗೆ ಸೂಕ್ತವಾದ ಮತ್ತು ಅದರ ಅನುಕೂಲಕ್ಕಾಗಿ ಸರಳವಾದ ಕಾಯ್ದೆಯನ್ನು ತರಲು ನಿರ್ಬಂಧಿತ ಮತ್ತು ನಿಯಂತ್ರಕ ಸ್ವರೂಪದಲ್ಲಿ ಇರುವ ನಿಬಂಧನೆಗಳನ್ನು ತೆಗೆದುಹಾಕಲು, ಬೆಳವಣಿಗೆ ಪೂರಕವಾಗಿ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

2. ಸರ್ಫಾಸಿ(SARFAESI) ಕಾಯ್ದೆ:

ಸರ್ಫಾಸಿ ಕಾಯಿದೆಯಡಿ ಬ್ಯಾಂಕುಗಳು ನೀಡಿರುವ ನೋಟಿಸ್‌ಗಳಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕವನ್ನು ಕಾಫಿ ಬೆಳೆಗಾರರು ವ್ಯಕ್ತಪಡಿಸಿದರು. ವಿವರವಾದ ಸಂವಾದದ ನಂತರ, ಈ ಸಮಸ್ಯೆಯನ್ನು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಚರ್ಚಿಸಲಾಗುವುದು ಮತ್ತು ಸದ್ಯದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಸಚಿವರು ಕಾಫೀ ಬೆಳೆಗಾರರಿಗೆ ಭರವಸೆ ನೀಡಿದರು.

Also read  ಕಾಫಿ ಹಣ್ಣುಗಳನ್ನು ತಿನ್ನುತ್ತಿರುವ ಕಾಡಾನೆಗಳು:ಕಾಫಿ ಬೆಳೆಗಾರರು ಕಂಗಾಲು

3.ಸಾರಿಗೆ ಮತ್ತು ಮಾರ್ಕೆಟಿಂಗ್ ಸಹಾಯ ಯೋಜನೆ (ಟಿಎಂಎ)

ಸಾರಿಗೆ ಮತ್ತು ಮಾರ್ಕೆಟಿಂಗ್ ಸಹಾಯ ಯೋಜನೆ (ಟಿಎಂಎ) ಅಡಿಯಲ್ಲಿ ಹೆಚ್ಚಿನ ಸಹಾಯವನ್ನು ಕೋರಿದರು. ರಫ್ತುದಾರರಿಗೆ ಕೃಷಿ ರಫ್ತಿಗೆ ಕನಿಷ್ಠ ಒಂದು ವರ್ಷದವರೆಗೆ ಸಹಾಯ ಮಾಡುವ ವಿಶೇಷ ಪ್ಯಾಕೇಜ್ ಅನ್ನು ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು ಯೋಜನೆಯಡಿ ಪರಿಗಣಿಸಲಾಗುವುದು ಎಂದು ಗೋಯೆಲ್ ಭರವಸೆ ನೀಡಿದರು.

4.ಕಾಫೀ ವೈಟ್ ಸ್ಟೆಮ್ ಬೋರರ್ ಕಾಯಿಲೆ 

ಕಾಫೀ ವೈಟ್ ಸ್ಟೆಮ್ ಬೋರರ್ ಕಾಯಿಲೆ ಸಮಸ್ಯೆಯ ಕುರಿತು ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್) ಸುಧಾರಿತ ಸಂಶೋಧನೆ ಆರಂಭಿಸಲು ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಸಂಬಂಧಿಸಿದ ಸಚಿವಾಲಯಗಳೊಂದಿಗೆ ಚರ್ಚಿಸಿದ ನಂತರ ಕಾರ್ಯಸಾಧುವಾದ ಪ್ಯಾಕೇಜ್ ಅನ್ನು ರೂಪಿಸಲಾಗುವುದು ಎಂದು ಗೋಯೆಲ್ ಭರವಸೆ ನೀಡಿದರು. ರೈತರ ಕ್ಷೇತ್ರಗಳಲ್ಲಿ ವಿಸ್ತರಣಾ ಸಿಬ್ಬಂದಿ ಕೈಗೊಳ್ಳಬೇಕಾದ ಕ್ಷೇತ್ರ ಭೇಟಿಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಸೆಮಿನಾರ್‌ಗಳು ಸೇರಿದಂತೆ ವಿಸ್ತರಣಾ ಚಟುವಟಿಕೆಗಳ ರಿಯಲ್​ ಟೈಮ್​ನಲ್ಲಿ ನವೀಕರಣಕ್ಕಾಗಿ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲು ಸಚಿವರು ಕಾಫೀ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.

ಕಾಫೀ ಮಂಡಳಿಯನ್ನು ಮುಚ್ಚಲಾಗುವುದು ಎಂಬ ಆತಂಕದ ಬಗ್ಗೆ ಹೇಳಿಕೊಂಡಾಗ, ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶಗಳಿಲ್ಲ ಎಂದು ಗೋಯೆಲ್ ಹೇಳಿದರು.

ಕಾಫೀ ಬೆಳೆಗಾರರಿಗೆ, ವಿಶೇಷವಾಗಿ ಸಣ್ಣ ಬೆಳೆಗಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ವಾಣಿಜ್ಯ ಸಚಿವಾಲಯದಿಂದ ಕೃಷಿ ಸಚಿವಾಲಯಕ್ಕೆ ಕಾಫೀ ಮಂಡಳಿಯನ್ನು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಇದು ಕೃಷಿ ವಲಯದ ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಕಾಫೀ ಬೆಳೆಗಾರರಿಗೂ ವಿಸ್ತರಿಸುವುದನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Also read  SIDE EFFECTS of Drinking Too much COFFEE : You need to know about!